ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಆಗಿರುವ ಡ್ಯಾಮೇಜುಗಳನ್ನು ಸರಿಪಡಿಸಲು ಸಾರಿಗೆ ಸಚಿವರು ಚರ್ಚೆ ಮಾಡಿ ಬಗೆಹರಿಸುವ ಭರವಸೆ

ಪತ್ರಿಕಾ ಹೇಳಿಕೆ

ಕೆ.ಎಸ್.ಆರ್.ಟಿ.ಸಿ ನೌಕರರು ಕೆಲ ತಿಂಗಳ ಹಿಂದೆ ಒಕ್ಕಲಿಗರ ಸಂಘಟನೆ , ರಾಜ್ಯ ರೈತ ಸಂಘ ಸೇರಿದಂತೆ ಹಲವಾರು ಸಂಘಟನೆಗಳ ಬೆಂಬಲದಿಂದ ಸಾರಿಗೆ ನೌಕರರ ಕೂಟದಿಂದ ತಮ್ಮ ಬೇಡಿಕೆ ಈಡೇರಿಕೆಗಾಗಿ ಬೃಹತ್ ಮುಷ್ಕರ ಮಾಡಿರುವುದು ತಮಗೆ ತಿಳಿದ ವಿಷಯವಾಗಿದೆ . ಮುಂದುವರೆದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ( ರಿ ) ದಿಂದ ನಮ್ಮ ಸಂಘಟನೆ ಸೇರಿ ಹಲವು ಸಂಘಟನೆಗಳು ಕೂಟದಿಂದ ಹೊರಬಂದಿರುತ್ತೇವೆ , ಕಾರಣ ಮುಷ್ಕರ ಸಂಧರ್ಬದಲ್ಲಿ ಹಲವಾರು ನೌಕರರಿಗೆ ವಜಾ , ವರ್ಗಾವಣೆ , ಅಮಾನತ್ತು ಹಾಗೂ ಪೊಲೀಸ್‌ ಕೇಸ್‌ಗಳು ಆಗಿದ್ದು ಅವುಗಳನ್ನು ಸರಿಪಡಿಸಲು ಇವರುಗಳು ಸರಿಯಾದಂತ ಕ್ರಮ ತೆಗೆದುಕೊಳ್ಳದೆ ಏಕ ಪಕ್ಷೀಯ ನಿರ್ಧಾರಗಳನ್ನು ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ಆರ್ ಚಂದ್ರಶೇಕರ್ ರವರ ನಡವಳಿಕೆ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ . ಗೌರವ ಅಧ್ಯಕ್ಷರು ಶ್ರೀ ಕೋಡಿಹಳ್ಳಿ ಚಂದ್ರಶೇಕರ್ ರವರು ಕೂಡ ಈ ವಿಷಯಗಳಲ್ಲಿ ವಿಫಲರಾಗಿರುತ್ತಾರೆ . ಈ ಎಲ್ಲಾ ಬೆಳವಣಿಗೆಗಳಿಂದ ನೌಕರರಿಗೆ 4 ತಿಂಗಳಿನಿಂದ ಸರಿಯಾದ ರೀತಿಯಲ್ಲಿ ಸಂಬಳ ಸಿಗದೆ ನೌಕರರು ಕುಟುಂಬ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗಿದೆ . ಆರ್.ಚಂದ್ರಶೇಕರ್ ರವರು ಸಂಘವನ್ನು ಕಾನೂನು ರೀತಿಯಲ್ಲಿ ನಡೆಸದೆ ತನಗೆ ಇಷ್ಟಬಂದಹಾಗೆ ಸಂಘದಲ್ಲಿರುವ ಹಲವಾರು ಪಧಾದಿಕಾರಿಗಳನ್ನು ಉಚ್ಚಾಟನೆ ಮಾಡಿ ಸಂಘವನ್ನು ಮನಸೋ ಇಚ್ಛೆ ನಡೆಸುವುದರಿಂದ ಉಳಿದ ಪಧಾದಿಕಾರಿಗಳು ಇವರ ನಡೆವಳಿಕೆಯಿಂದ ಬೇಸತ್ತು ಸ್ವಯಂ ರಾಜೀನಾಮೆ ನೀಡಿ ಸಂಪೂರ್ಣ ವಾಪಸ್ಸು ಬಂದಿರುತ್ತಾರೆ . ಮೇಲೆ ತಿಳಿಸಿರುವ ಹಾಗೆ ಹಲವಾರು ನೌಕರರಿಗೆ ಆಗಿರುವ ಡ್ಯಾಮೇಜುಗಳನ್ನು ಸರಿಪಡಿಸಲು ಸಾರಿಗೆ ಸಚಿವರನ್ನು ದಿನಾಂಕ – 16-07-2021 , ಶುಕ್ರವಾರ ರಂದು ಭೇಟಿ ಮಾಡಿ ನೌಕರರಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಿ ವೇತನದ ವಿಚಾರವಾಗಿ ಸಭೆ ಕರೆದು ಸರಿಪಡಿಸಬೇಕೆಂದು ಸುಮಾರು 2 ಗಂಟೆಗಳ ಕಾಲ ಚರ್ಚೆ ಮಾಡಿ ಮಾತನಾಡಿರುತ್ತೇವೆ . ಸಾರಿಗೆ ಸಚಿವರು ಕೂಡ ಅದಕ್ಕೆ ರೀತಿಯಲ್ಲಿ ಮಾತುಕತೆ ಮಾಡಿ ಸಮಸ್ಯೆ ಬಗೆಹಸುತ್ತೇನೆಂದು ಸಕರಾತ್ಮಕವಾಗಿ ಸ್ಪಂದಿಸಿರುತ್ತಾರೆ ಮತ್ತು ಘಟಕಗಳಲ್ಲಿ ಹಲವಾರು ರೀತಿಯ ಕಿರುಕುಳಗಳು ಆಗುತ್ತಿವೆ ಅದನ್ನು ಕೂಡ ಸರಿಪಡಿಸಬೇಕು ಎಂದು ತಿಳಿಸಿರುತ್ತೇವೆ ಅದಕ್ಕೆ ಅವರು ದಿನಾಂಕ 19-07-2021 , ಸೋಮವಾರ ದಂದು ವ್ಯವಸ್ಥಾಪಕ ನಿರ್ದೇಶಕರುಗಳು ಮತ್ತು ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ ಚರ್ಚೆ ಮಾಡಿ ಬಗೆಹರಿಸುವ ಭರವಸೆ ನೀಡಿರುತ್ತಾರೆ . ಈ ಎಲ್ಲಾ ವಿಷಯಗಳ ಸಂಬಂದ ಕ್ಯಾಬಿನೆಟ್ ಸಚಿವರುಗಳಾದ ಆರ್.ಅಶೋಕ್ ( ಕಂದಾಯ ಸಚಿವರು ) , ಎಸ್.ಆರ್.ಬೊಮ್ಮಾಯಿ ( ಗೃಹ ಸಚಿವರು ) ಹಾಗೂ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಅಧ್ಯಕ್ಷರು ನಂದೀಶ್ ರೆಡ್ಡಿ ಮತ್ತು ಉಪಾಧ್ಯಕ್ಷರು ಎಮ್.ಆರ್.ವೆಂಕಟೇಶ್ ರವರನ್ನು ಬೇಟಿ ಮಾಡಿ ಮನವಿ ಪತ್ರಗಳನ್ನು ನೀಡಿ ಸಮಸ್ಯೆ ಬಗೆಹರಿಸಲು ತಾವುಗಳು ಸಹಕರಿಸಬೇಕೆಂದು ಮನವಿ ಮಾಡಿರುತ್ತೇವೆ .

ಅಧ್ಯಕ್ಷರು

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.