
ಜನ ಸಮೃದ್ಧಿ ಸಂಘ ‘ ದ ಸಂಸ್ಥಾಪಕರು ಹಾಗೂ ಅಧ್ಯಕ್ಷರಾಗಿರುವ ಶ್ರೀ ಶೈಲೇಶ್ ನಾಜರೆ ಹಾಗೂ ಅವರ ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ನಡೆಯುವಂತಹ ಕ್ಷತ್ರಿಯ ಏಕತಾ ರಥ ಯಾತ್ರೆಯು ದಿನಾಂಕ 14-03-2021 ರ ಭಾನುವಾರ ಬೆಳಿಗ್ಗೆ 9-30 ಕ್ಕೆ ಸದಾಶಿವನಗರ , ಭಾಷ್ಯಂ ಸರ್ಕಲ್ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಲಾರ್ಪಣೆ ಮಾಡಿ , ತದನಂತರ ನಾಡದೇವಿ ಶ್ರೀ ಚಾಮುಂಡೇಶ್ವರಿ , ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಆರಾಧ್ಯ ದೈವ ಪಾಂಡುರಂಗನ ರಥವು ಹೊರಡಲಿದ್ದು , ಪಂಡರಾಪುರದ ಸಾಂಪ್ರಾದಾಯಿಕ ವಾರಕರಿ ಭಜನೆಯೊಂದಿಗೆ ಚೌಡಯ್ಯ ಮೆಮೋರಿಯಲ್ ಹಾಲ್ , ವೈಯಾಲಿಕಾವಲ್ , ಬೆಂಗಳೂರು , ಇಲ್ಲಿ ಮುಕ್ತಾಯಗೊಳ್ಳಲಿದೆ .

ನಂತರ ಜನ ಸಮೃದ್ಧಿ ಸಂಘದ ವತಿಯಿಂದ ವೇದಿಕೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಹಾಗೂ ಘನ್ಯ ಮಾನ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ . ಜನ ಸಮೃದ್ಧಿ ಸಂಘದ ಉದ್ದೇಶವು ಕ್ಷತ್ರಿಯ ಪರಂಪರೆಯ ಎಲ್ಲಾ ಪಂಗಡಗಳನ್ನು ಒಳಗೂಡಿಸಿ, ಸಾಮಾಜಿಕ , ಆರ್ಥಿಕ , ವಿಶೇಷವಾಗಿ ರಾಜಕೀಯದಲ್ಲಿ ಅಭಿವೃದ್ಧಿಗೊಳಿಸಲು ಸಜ್ಜಾಗಿರುತ್ತದೆ .
City Today News
9341997936